ಕವನಗಳ ಗುಚ್ಛ

ಕವನಗಳ ಗುಚ್ಛ

ಸೂರ್ಯನ ಹೊಳಪುಳ್ಳವಳು ನೀನು!
ನಿನ್ನ ಮೊಗದ ಹೊಳಪಿಗೆ‌ ನಾನು!

ಕಡಲಲ್ಲಿರುವ ಅಲೆಗಳು ನೀನು!
ನಿನ್ನ ನಗುವಿನ ಸೊಬಗಿಗೆ ಬಿದ್ದವನು ನಾನು!

ಕೋಗಿಲೆಯಂಥ ಧ್ವನಿವುಳ್ಳವಳು ನೀನು! ನಿನ್ನ ಕಂಠಕ್ಕೆ‌ ಬೆರಗಾದವನು ನಾನು!!

ಮುಗಿಲಲ್ಲಿ ಹೊಳೆವ ನಕ್ಷತ್ರದಂತೆ ನೀನು!
ನಿನ್ನ ಅಂದವನ್ನು ನೋಡಿ ಮೋಹಿತನಾದೆ ನಾನು!!

ಮೇಘದಿಂದ ಬರುವ ಸೋನೆಮಳೆಯಂತೆ ನೀನು!
ನಿನ್ನ ಆಗಮನಕ್ಕಾಗಿ ಕಾದಿರುವ ಧರೆಯಂತೆ ನಾನು!!

ಅಂಧಕಾರದಲ್ಲಿ ಜೊತೆ ಬರುವ ನೆರಳಿನಂತೆ ನೀನು! ಜ್ಞಾನದ ದೀಪದೆಡೆಗೆ   ಕರೆದೊಯ್ಯಲು ಹಂಬಲಿಸಿರುವೆ ನಾನು!!

ಬಾನಲ್ಲಿರುವ ಶಶಿಯಂತೆ ನೀನು!
ನಿನ್ನ ಸ್ವರ್ಶಿಸಲು‌ ಬರುವ ಅಲೆಯಂತೆ ನಾನು!!!

ಕರಗಿತು ಮೌನ! ನೆನೆದವು ನಯನ!
ತೊದಲಿತು ಮಾತು! ನಿನ್ನ ಕಂಡ ಕೂಡಲೇ!!

ಹೃದಯ ತುಂಬಿತ್ತು! ಮನಸ್ಸು ಕುಣಿಯಿತು!ಮುಖದಲ್ಲಿ ನಗು ಬೀರಿತು!
ನಿನ್ನ ಕಂಡ ಕೂಡಲೇ ಮೌನ ಮಾಯವಾಯಿತು!!

ಸೂರ್ಯ ಮರೆಯಾದ! ಮೋಡ ಮುಸುಕಿದವು! ವರ್ಷ ಸುರಿಯಿತು!
ನಿನ್ನ ಕಂಡ ಕೂಡಲೇ ಮೌನ ಮಾಯವಾಯಿತು!!

ಚಂದ್ರ ನಾಚಿದ! ಅಲೆ ಅಪ್ಪಳಿಸಿದವು!
ನಕ್ಷತ್ರ ಮಿನುಗಿದವು! ನಿನ್ನ ಕಂಡ ಕೂಡಲೇ ಮೌನ ಮಾಯವಾಯಿತು!!

ಕಾಗದದಲ್ಲೇ ದುಂಬಿಯನ್ನು ಕರೆಸಿ!
ಮಕರಂದವನ್ನು ಸವಿಸುವ ಇವನು!!

ರೆಕ್ಕೆಯಿಲ್ಲದ ಹಕ್ಕಿಯನ್ನು!
ತನ್ನ ನುಡಿಯಲ್ಲಿ ಹಾರಿಸುವವ ಇವನು!!

ಮೌನಿಯನ್ನು ಪದಗಳಲ್ಲಿ!
ಮಾತನಾಡಿಸುವವ‌ ಇವನು!!

ವಿಜ್ಞಾನಿ ಕಾಣದ್ದನ್ನು ಸುಜ್ಞಾನಿ!
ಕಂಡವವ ಇವನು!!

ಯಾರಿವನು? ಯಾರಿವನು?
ಕವಿ ಇವನು ಶಾರದೆಯ ಮಗನೂ
   ಇವನು!!

ರವಿ ಕಾಣದ್ದನ್ನು ಕವಿ !
..ಕಂಡವನು ಇವನು!!!!

ಕಥೆಯೊಂದನ್ನು ಹೇಳಬೇಕೆಂದಿದೆ ಮನ!
ಹುಡುಕುತಿಹೆ ಪದಗಳ ಅದನ್ನ ಬಿತ್ತರಿಸಿಸಲು ಈ ಕವನ! ಸೂತಪುತ್ರ ನೆಂದರೆ ಇವನಿಗೆ ಪ್ರಾಣ! ಅವನಂತೆ ಇವನಿಗೂ ನೋವುಗಳೇ ನೆಚ್ಚಿನ ತಾಣ!
ಪ್ರತಿ ಹೆಜ್ಜೆಯಲ್ಲೂ ಇವನಿಗೆ ಅನುಮಾನ! ಬಿಡುತ್ತಿಲ್ಲ ಆದರೂ ಗುರಿಯೇಡಿನ ಯಾನ! ಅವಳ ಜೊತೆ ನಡೆಯುತ್ತಿದೆ ಸಂತೋಷದ ಪಯಣ!!

ಕೆ ಆರ್ ಸುಮತೀಂದ್ರ ಲೇಖಕರು.

ನನ್ನವಳು


ಕನಸು ಕಟ್ಟಿದವಳು
ಮನಸ್ಸು ಬಿಚ್ಚಿದವಳು
ಮೌನದಲಿ ಮನದೊಳಗೆ
 ಮನೆಮಾಡಿದವಳು
ಆಕೆ ನನ್ನವಳು

ಕೂಸಾಗಿ ನನ್ನೊಡನೆ
ಕದನವನೆ ಗೈದವಳು
ಕೂಸನ್ನೆ ಕೈಗಿತ್ತು
ನೆನಪಿನಲಿ ನಕ್ಕವಳು
ಆಕೆ ನನ್ನವಳು

ಒಮ್ಮೊಮ್ಮೆ ಮಿಂಚಂತೆ
ಇನ್ನೊಮ್ಮೆ ಗುಡುಗಂತೆ
ಕೊನೆಗೂ ಬರಿ ಮಳೆಯಾಗಿ
ಹೂವಾಗಿ ಸುರಿವವಳು
ಆಕೆ ನನ್ನವಳು

ಅವಳಿಲ್ಲದೆ ಉಸಿರಿಲ್ಲ
ಉಸಿರಿಲ್ಲದೆ ಹಸಿರಿಲ್ಲ
ಉಸಿರು ಕಟ್ಟುವ ಗಳಿಗೆ
ಜೀವ ಗಂಗೆಯಾದವಳು
ಆಕೆ ನನ್ನವಳು

ರಚನೆ: ಉಮೇಶ ಮುಂಡಳ್ಳಿ ಭಟ್ಕಳ

ಉಗ್ರರೇ ಎಚ್ಚರ


ಭಾರತೀಯ ನಾರಿ ರೊಚ್ಚಿಗೆದ್ದರೆ 
ಬೆಂಕಿಯ ಬಾಣ ಸುರಿಸುವಳು 
ರಕ್ತದೋಕುಳಿ ಆಡುವಳು 

ಪಾಪಿಗಳೇ ಸಿಂಧೂರ ಅಳಿಸಿದಿರಾ
ಸೈನಿಕರು ಸುಮ್ಮನಿರುವರೇ
ಅಟ್ಟಾಡಿಸಿ ಕೊಲ್ಲುವರು 

ಉಗ್ರನರಸಿಂಹಗುಡುಗುತಿರುವನು 
ಉಗ್ರರ ಗಂಡೆದೆ ಸೀಳಲು
ಬಲು ಎಚ್ಚರ ಉಗ್ರರೆ 

ನೆಲಜಲವಾಯುದಾಳಿಗೆಓಡದಿರಿ 
ದಶದಿಕ್ಕುಗಳಿಂದಮುತ್ತುವರು
ನಿಮ್ಮನ್ನು ಹರಿದು ತಿನ್ನುವರು

ಮುನ್ನುಗ್ಗಿರಿನನ್ನವೀರಯೋಧರೇ
ಮೋದೀಜಿಯ ಬೆಂಬಲವಿದೆ
ಯುದ್ಧದಲ್ಲಿಗೆಲುವುನಮ್ಮದೇ 

 ರಚನೆ: ಅನ್ನಪೂರ್ಣ ಸು ಸಕ್ರೋಜಿ ಪುಣೆ

 

ಕವನ: ಸಿಂಧೂರ ಬೇಡಿತು ಸಂಹಾರ*


ನಮ್ಮ ದೇಶದ ಯೋಧರಿಗೆ ನಮನ
ಪಹಲ್ಗಾಮದಲಿ ಕಣ್ಣೀರಿಟ್ಟ ಸಿಂಧೂರ
ಭಾರತದೇಶವೇ ರೋಧಿಸಿತು ಆದಿನ
ರಾಷ್ಟ್ರವೇ ಬೇಡಿತು ಉಗ್ರರ ಸಂಹಾರ

ಪಾಕಿಸ್ತಾನದಲಿಯೋಧರು ನುಗ್ಗಿದರು
ಆಪರೇಶನ್ ಸಿಂಧೂರ ಮಾಡಿಗೆದ್ದರು
ನೆಲ ಜಲ ವಾಯು ದಾಳಿ ಮಾಡಿದರು
ಉಗ್ರರಅಡಗುತಾಣಬೂದಿಮಾಡಿದರು

ಭಾರತೀಯ ನಾರಿಯ ಸಿಂಧೂರ ಶಕ್ತಿ 
ಮುತ್ತೈದೆಯ ಆಕ್ರೋಶ ಪತಿಯ ಭಕ್ತಿ 
ನಮ್ಮಮೋದೀಜಿಯ ಯೋಧರ ಯುಕ್ತಿ 
ಪಾಪಿಗಳಿಗೆ ಗುಂಡೇಟುಗಳಿಂದ ಮುಕ್ತಿ

ಕೆಚ್ಚೆದೆಯ ಯೋಧರ ವಾಯುದಾಳಿ
ರಕ್ತಬೀಜಾಸುರರ ನೆತ್ತರದೋಕುಳಿ
ಶಹಬ್ಬಾಸ್ ವೀರ ಶೂರ ಸೈನಿಕರೆ
ನಮ್ಮ ಅಭಿಮಾನ ನೀವು ಜವಾನರೆ 

ಲೇಖಕಿ: ಶ್ರೀಮತಿ ಅನ್ನಪೂರ್ಣ ಸಕ್ರೋಜಿ ಪುಣೆ.