ವೀರಸೋಮೇಶ್ವರ ಸ್ವಯಂಬುಶ್ರೀ
ಶ್ರೀಮದ್ ಜಗದ್ಗುರು ರಂಭಾಪುರಿ
ಶ್ರೀಪಿಠ ಪರಂಪರೆಯ ಶರನ್ನವರಾತ್ರಿ
ಆಚರಿಸಿ ತುಂಬಿಹಿರು ಭಕ್ತಿಯ ಸ್ಪೂರ್ತಿ
ಸಾಹಿತ್ಯ ಸಂಗೀತ ಕಲೆಗಳ ಕ್ರಾಂತಿ
ಎಬ್ಬಿಸಿ ನೀಡಿಹರು ಮನಗಳಿಗೆ ಶಾಂತಿ
ಸಾತ್ವಿಕ ಸತ್ವಶೀಲ ಸಮಾಜವು ನಿರ್ಮಿಸಿ
ಬರುವ ಭಕ್ತಸಮೂಹಕ್ಕೆ ಹರಸಿ ಹಾರೈಸಿ
ಭವದಲ್ಲಿ ಭಕ್ತಿಯ ಮಂತ್ರವನ್ನು ಸಾರಿ
ಮಾಡಿರುವರು ಸುಕ್ಷೇತ್ರ ಶ್ರೀ ರಂಭಾಪುರಿ
ಶಾಂತಿಯ ನೆಲೆಬೀಡು ಬಾಳೆಹೊನ್ನೂರು
ಅಧ್ಯಾತ್ಮದ ಅರಿವು ಬಿತ್ತಿರಲು ಶ್ರೀ ಗುರು
ಸದಾ ಭಕ್ತರನ್ನು ಕಾಯುವ ಸಾಕಾರಮೂರ್ತಿ
ಜಗದಗಲ ಹರಡಿಹುದು ನಿಮ್ಮಯ ಕೀರ್ತಿ
ಮಹಿಮೆಯು ಕೇಳಿರಲು ಆ ಸೂರ್ಯ
ಚಂದ್ರರು ನೋಡಿ ಕಣ್ತುಂಬಿಕೊಳ್ಳಲು
ಧರೆಗಿಳಿದು ಬಂದರು
ಅರಿಯದಾದೇನು ಗುರುವೇ ನಿಮ್ಮಯ ಶಕ್ತಿ
ಕರಮುಗಿದು ಕೇಳುವೆನು, ನೀಡಯ್ಯ ಮುಕ್ತಿ
ಸಿದ್ಧರಾಮ ಸಿ ಸರಸಂಬಿ ಕಾರಭೋಸಗಾ
ತಾ!! ಅಫಜಲಪುರ ಜಿ!! ಕಲಬುರ್ಗಿ✍️*
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ