ಹೂವಿನ ಬಗ್ಗೆ ಕವನ!!, ಹೊಂಗೆಯ ತಂಪು ನೀನು!ಜಾಜಿಯ ಕಂಪು ನಾನು!ಸೇವಂತಿಯ ಸೊಂಪು ನೀನು!ಗುಲಾಬಿಯ ಕೆಂಪು ನಾನು!!ಮಂದಾರದ ಸೊಗಸು ನೀನು!ತಾವರೆಯ ಸೊಬಗು ನಾನು!ಮಲ್ಲಿಗೆಯ ಸುವಾಸನೆ ನೀನು!ಸಂಪಿಗೆಯ ಸುಗಂಧ ನಾನು!!ಪಾರಿಜಾತದ ಪರಿಮಳ ನೀನು!ಸೂರ್ಯಕಾಂತಿಯ ಸುರಿಮಳೆ ನಾನು! ಸುಗಂಧರಾಜದ ಮಕರಂದ ನೀನು! ಕನಕಾಂಬರದ ಅಂದ ಚೆಂದ ನಾನು!!ನನ್ನ ಕವನ!!ಮನಸ್ಸಿನ ಭಾರವನ್ನು ಇಳಿಸುವುದು ಈ ನನ್ನ ಕವನ! ಹೃದಯದ ಮಿಡಿತವನ್ನು ಅಳೆಯುವುದು ಈ ನನ್ನ ಕವನ! ಸಂತೋಷದ ನಿಮಿಷವೇ ಹುಟ್ಟುವುದು ಈ ನನ್ನ ಕವನ! ನೋವು ನಲಿವಿನ ನಡುವೆ ಮುದ ನೀಡುವುದು ಈ ನನ್ನ ಕವನ!!ಮನಸು ಮನಸುಗಳ ಒಂದಾಗಿಸುವುದು ಈ ನನ್ನ ಕವನ! ಭಾವನೆಗಳನ್ನು ರವಾನಿಸುತ್ತಾ ಬೆಳಸುವುದು ಈನನ್ನ ಕವನ! ಹೇಳಹೊರಟರೆ ತೀರದು ಈ ನನ್ನ ಕವನ!ಬೆಳೆಸುತಿರಲಿ ಭಾಂಧವ್ಯವನ್ನು ಈ ನನ್ನ ಕವನ!!ಹೃದಯದ ಮಾತು!!ಎನಗಂದು ಇರಲಿಲ್ಲ ಸಂತೋಷದ ಅಧ್ಯಾಯ! ಎನಗಿದೆ ಪ್ರಾಮಾಣಿಕತೆಯಿಂದ ಸಹೃದಯ! ದುಡಿದು ಜಯಿಸಬೇಕೆಂಬುದು ನನ್ನ ನ್ಯಾಯ! ದೂರಾಗಲು ಹೇಳಬೇಡ ಇಲ್ಲಸಲ್ಲದ ಉಪಾಯ!!ಇಂದು ಎನಗಿದೆ ಸುಂದರ ಮನಮೋಹಕ ಕಾಯ! ಕಾರು ಬಾರು, ಆಫೀಸು ಹಲವಾರು ಆದಾಯ! ನಿನ್ನ ಕಷ್ಟಕಾರ್ಪಣ್ಯಗಳು ಹೇಳಿಬಿಡು ವಿದಾಯ! . ಮನಸಾರೆ ಸೇರಿಬಿಡು ತೆರೆದಿಟ್ಟ ನನ್ನ ಹೃದಯ!! ಕೆ ಆರ್ ಸುಮತೀಂದ್ರ ಲೇಖಕರು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ